
|
|

|
ವೃತ್ತಿ ಶಿಕ್ಷಣ
ಕೌಶಲ್ಯಪೂರಿತ ಕೆಲಸಗಾರರು ಮತ್ತು ಪುರಾತನ ಪಾಶ್ಚಿಮಾತ್ಯ ಸಮಾಜದ ಮೇಲಿರುವ ಭೌಗೋಳಿಕ ಅನುಕೂಲತೆಗಳು ಭಾರತದ ಶೀಘ್ರಬೆಳವಣಿಗೆ-ಯಾಗುತ್ತಿರುವ ಆರ್ಥಿಕತೆಯ ಒಂದು ಮುಖ್ಯ ಅಂಶವಾಗಿದೆ. ತಂತ್ರಜ್ಞರು ಮತ್ತು ಇತರ ಕುಶಲ ಕರ್ಮಿಗಳು ಮತ್ತು ಶಿಲ್ಪಿಗಳು ತಯಾರಿಕೆ ಮತ್ತು ಸೌಲಭ್ಯ ಅಭಿವೃದ್ಧಿಯ ಬೆನ್ನೆಲುಬಾಗಿದ್ದಾರೆ. ಕುಶಲ ಕರ್ಮಿಗಳ ಬೇಡಿಕೆ ಅಪಾರವಾಗುತ್ತಿದೆ, ಆದರೆ, ಈ ಬೇಡಿಕೆಯನ್ನು ಪ್ರಸ್ತುತ ಪದ್ಧತಿಯು ತುಂಬಲಾರದು, ಏಕೆಂದರೆ ಒದಗಿಸುತ್ತಿರುವ ಕೌಶಲ್ಯವು ಉದ್ಯಮಿಯ ಅವಶ್ಯಕತೆಯನ್ನು ತುಂಬುತ್ತಿಲ್ಲ. ಈ ಪದ್ಧತಿಯನ್ನು ಬದಲಾಗುತ್ತಿರುವ ಸಂದರ್ಭಕ್ಕೆ ಹೆಚ್ಚು ಸಮಂಜಸ ಮಾಡಲು ಮತ್ತು ಭವಿಷ್ಯದಲ್ಲಿ ಈ ಭೌಗೋಳಿಕ ಅನುಕೂಲತೆಯನ್ನು ಬಳಸಿಕೊಳ್ಳಲು, ಹೊಂದಿಕೆ-ಗುವ, ಉಳಿದುಕೊಳ್ಳುವ, ಒಳಗೊಳ್ಳುವ ಮತ್ತು ರಚನಾತ್ಮಕ ವೃತ್ತಿ ಶಿಕ್ಷಣದ ಬೋಧನಾ ವಿನ್ಯಾಸದ ರಚನೆಯ ಅವಶ್ಯಕತೆ ಇದೆ.
ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
- ಚಾಲ್ತಿಯಲ್ಲಿರುವ ಸಂಸ್ಥೆಗಳ ಕಟ್ಟಡಗಳನ್ನು ಬಲಪಡಿಸುವುದು
- ಸ್ಥಳೀಯ ಅವಶ್ಯಕತೆಗಳು ಮತ್ತು ಸಾಮರ್ಥ್ಯಗಳ-ನ್ನು ಗಮನಿಸುವ ಪರ್ಯಾಯ ಮಾರ್ಗಗಳಾದ ಸಾಮರ್ಥ್ಯದ ಹೆಚ್ಚಳ, ಸಾರ್ವಜನಿಕ ಮತ್ತು ಖಾಸಗಿ ಸಹಯೋಗ, ಗಣಕೀಕೃತ ತರಬೇತಿ, ದೂರ ಕಲಿಕೆ ಮತ್ತು ವಿಕೇಂದ್ರೀಕೃತ ನಮೂನೆಗಳ ರಚನೆ
- ಹೆಚ್ಚುತ್ತಿರುವ ಕುಶಲ ಕರ್ಮಿಗಳ ಬೇಡಿಕೆಯನ್ನು ಈಡೇರಿಸುವುದು ಮತ್ತು ಅನೌಪಚಾರಿಕ ಮತ್ತು ಅಸಂಘಟಿತ ವಲಯಗಳ ನೌಕರರಿಗೆ ತರಬೇತಿ ನೀಡುವುದು
- ನಿಯಂತ್ರಣ ಮತ್ತು ಮಾನ್ಯತೆ ಚೌಕಟ್ಟು.
- ವೃತ್ತಿ ಶಿಕ್ಷಣವು ದೈಹಿಕ ಕೆಲಸ ಎಂಬ ನಕಾರಾತ್ಮಕ ಭಾವನೆಯನ್ನು ನಿವಾರಿಸಲು ರಾಷ್ಟ್ರೀಯ ಮಟ್ಟದಲ್ಲಿ ಪುನರ್ ಗುರುತಿಸುವಿಕೆ.
|
|
|